logo

ಮತ್ತೋಮ್ಮೆ ಮೋದಿ ಕರೆ ಕೊಟ್ಟ ಮುಸ್ಲಿಂ ಮುಖಂಡ ಶ್ರೀ ಇಲ್ಯಾಸ್ ಅಹಮ್ಮದ್

ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಶ್ರೀ ಬಾಲರಾಜ್ ರವರನ್ನು ಬೆಂಬಲಿಸಿ ವರುಣ ವಿಧಾನಸಭಾ ಕ್ಷೇತ್ರದ ಹಲವರು ಮುಸ್ಲಿಂ ಮುಖಂಡರುಗಳು ಹಾಗು ಮಹಿಳೆಯರು ಇಂದು ಭಾರತೀಯ ಜನತಾ ಪಾರ್ಟಿಯಲ್ಲಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಅಭ್ಯರ್ಥಿಯಾದ ಶ್ರೀ ಬಾಲರಾಜ್ ರವರು, ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಶ್ರೀ ಎಸ್.ಮಹದೇವಯ್ಯರವರು, ಗುರುಪಾದಸ್ವಾಮಿಯವರು, ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮುಖಂಡರಾದ ಇಲ್ಯಾಸ್ ಅಹಮದ್, ಜಿಯಾವುಲ್ಲ, ಉಮರ್ ನಗರ್ಲೆ, ಏಜಾಸ್ ಪಾಷ, ಶ್ರೀಮತಿ ಪ್ಯಾರಿಜಾನ್ ಇನ್ನು ಮುಂತಾದವರು ಹಾಜರಿದ್ದರು.
ಸಭೆಯಲ್ಲಿ ಮಾತನಾಡಿದ ಇಲ್ಯಾಸ್ ಅಹಮದ್ ರವರು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಂತೆ ಎಲ್ಲರನ್ನು ಸರಿ ಸಮಾನವಾಗಿ ಕಾಣುವ ಮೋದಿಜಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿಸಲು ಬಿಜೆಪಿಗೆ ಮತ ನೀಡಲು ಮುಸ್ಲಿಮರಿಗೆ ಕರೆ ನೀಡಿದರು.

10
1150 views